ನೈಸರ್ಗಿಕ ದುರಾದೃಷ್ಟಕರ ಅವಘಡಗಳ ರೂಪದಲ್ಲಿ ರೈತರು ತಮ್ಮ ಬೆಳೆಗಳಿಗೆ ನಿರಂತರ ಅಪಾಯವನ್ನು ಎದುರಿಸುತ್ತಾರೆ. ಇದು ಬೆಳೆಗಳ ಉತ್ಪಾದನೆ ಅಥವಾ ಗುಣಮಟ್ಟವನ್ನು ಕುಗ್ಗಿಸುವ ಕಾರಣದಿಂದ ಈ ಸಮಸ್ಯೆಯು ಭಾರೀ ನಿರಾಶೆಯನ್ನು ಉಂಟುಮಾಡುತ್ತದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಟಕ್ಕೆ ಸಿಲುಕಿಕೊಳುತಾರೆ. ಇಂತಹ ಸಂದರ್ಭಗಳಲ್ಲಿ ರೈತರು ಸಾಲಗಳನ್ನು ಅಥವಾ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಇಂತಹ ಕಷ್ಟದ ಸಮಯದಲ್ಲಿ ರೈತರಿಗೆ ಸಹಾಯ ಮಾಡಲು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಫಲಾನುಭವಿ ಯೋಜನೆಗಳನ್ನು ಪ್ರಾರಂಭಿಸುತ್ತವೆ. ಕರ್ನಾಟಕದ ಸರ್ಕಾರವು ಕೂಡಾ ರೈತರಿಗಾಗಿ 'ರೈತಸಿರಿ' ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಕುರಿತು ಎಲ್ಲಾ ಸಂಬಂಧಿತ ಮಾಹಿತಿಯನ್ನು ಪಡೆಯಲು, ಮುಂದಿನ ಲೇಖನವನ್ನು ಓದಿ.
ಕರ್ನಾಟಕ ರೈತಸಿರಿ ಯೋಜನೆ ಎಂದರೇನು:-
ರೈತ ಸಿರಿ ಯೋಜನೆಯ ಮುಖ್ಯಾಂಶಗಳು:-
ಯೋಜನೆ | ಯೋಜನೆಬಗ್ಗೆ |
---|---|
ಯೋಜನೆಯ ಹೆಸರು | ಕರ್ನಾಟಕ ರೈತ ಸಿರಿ ಯೋಜನೆ |
ಯೋಜನೆಯ ಪ್ರಾರಂಭ | ಜುಲೈ 2019-2020 |
ಪ್ರಾರಂಭಿಸಿದವರು | ಎಚ್ಡಿ ಕುಮಾರಸ್ವಾಮಿ |
ಯೋಜನೆಯ ಉದ್ದೇಶ | ಪ್ರತೀ ಹೆಕ್ಟರ್ ಗೆ 10000 ರೂಪಾಯಿ ನೀಡುವುದು |
ಯೋಜನೆಯ ವಿಭಾಗ | ಕೃಷಿ ವಿಭಾಗದ ಯೋಜನೆ |
ಫಲಾನುಭವಿಗಳು ಯಾರು | ಕರ್ನಾಟಕದ ಸಿರಿಧಾನ್ಯ ಬೆಳೆಯುವ ರೈತರು |
ಅರ್ಜಿ ಸಲ್ಲಿಸುವುದು ಹೇಗೆ | ನಿಮ್ಮ ನಿಮ್ಮ ಹತ್ತಿರದ ಕೃಷಿ ವಿಭಾಗಕ್ಕೆ ಬೇಟಿ ನೀಡಿ |
ಅಧಿಕೃತ ವೆಬ್ಸೈಟ್ | https://raitamitra.karnataka.gov.in/ |
ರೈತಸಿರಿ ಯೋಜನೆಯ ಉದ್ದೇಶ:-
- ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆಯನ್ನು ಹೆಚಿಸುವುದು ಮತ್ತು ಅವುಗಳ ಉತ್ಪಾದನಾ ಪ್ರದೇಶವನ್ನು ಹೆಚಿಸುವುದು.
- ಅತಿ ಕಡಿಮೆ ಮಳೆ ಬಿಳುವ ಪ್ರದೇಶಗಳಲ್ಲಿ ಮತ್ತು ಕಡಿಮೆ ಫಲವತತೆ ನೀಡುವ ಭೂಮಿಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಮಾಡುವುದು.
- ರಾಜ್ಯದ ಕೃಷಿ ಕಾರ್ಮಿಕರಿಗೆ ಮತ್ತು ರೈತರಿಗೆ ಆರ್ಥಿಕ ನೆರವು ನೀಡುವುದು.
- ರಾಗಿ ಬೆಳೆಗಾರರಿಗೆ ಪ್ರತಿ ಹೆಕ್ಟೇರಿಗೆ ಒಟ್ಟು 10,000 ರೂಪಾಯಿಯನ್ನು ನೀಡುವುದು.
- ಈ ಯೋಜನೆಯಡಿ ಸಿರಿಧಾನ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸುವುದು.
ರೈತಸಿರಿ ಯೋಜನೆಯ ಅರ್ಹತೆ (Eligibility):-
- ಫಲಾನುಭವಿಗಳು ಕರ್ನಾಟಕ ರಾಜ್ಯದ ರೈತರಾಗಿದ್ದು ಭೂಮಿಯು ಅವರ ಹೆಸರಿನಲ್ಲಿರಬೇಕು.
- ಜಂಟಿ ಖತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು.
- ತಂದೆ ಅಥವಾ ತಾಯಿಯ ಹೆಸರಿನಲ್ಲಿ ಭೂಮಿಯನ್ನು ಹೊಂದ್ದಿದು ಅವರು ಮರಣ ಹೊಂದ ಸಂದರ್ಭದಲ್ಲಿ ಮನೆಯ ಎಲ್ಲಾ ಸದಸ್ಯರ ಅನುಮತಿ ಪಡೆದು ಅರ್ಜಿಯನ್ನು ಸಲಿಸಬೇಕು.
- ಫಲಾನುಭವಿಗಳು ಸಿರಿಧಾನ್ಯಗಳಾದ ಕೊರಲೆ, ಸಾಮೆ, ಹಾರಕಾ, ನವಣೆ, ಊದಲು ಮತ್ತು ಬರಗು ಇತ್ಯಾದಿ ಸಿರಿಧಾನ್ಯಗಳನ್ನು ಪ್ರಮುಖ ಬೆಳೆಯಾಗಿ ಬೆಳೆದಿರಬೇಕು.
- ಮಹಿಳೆಯರ ಹೆಸರಿನಲ್ಲಿ ಖಾತೆ ಹೊಂದಲ್ಲಿ ಮಹಿಳೆಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು.
ಕರ್ನಾಟಕ ರೈತ ಸಿರಿ ಯೋಜನೆಯ ಲಾಭಗಳು:-
- ರೈತ ಸಿರಿ ಯೋಜನೆಯು ಕರ್ನಾಟಕದಲ್ಲಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ.
- ಇದು ಸಿರಿಧಾನ್ಯಗಳ ಬೇಸಾಯವನ್ನು ಬೆಳೆಯಲು ಪ್ರೋತ್ಸಾಹಿಸುತ್ತದೆ.
- ಇದು ಪ್ರತಿ ಹೆಕ್ಟೇರ್ಗೆ 10,000 ರೂ. ಗಳ ಆರ್ಥಿಕ ನೆರವು ನೀಡುತ್ತದೆ.
- ನೇರ ಲಾಭ ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಮೊತ್ತವನ್ನು ಕಳುಹಿಸಲಾಗುತ್ತದೆ.
ಯೋಜನೆಗೆ ಅಗತ್ಯವಿರುವ ದಾಖಲೆಗಳು:-
- ಆಧಾರ್ ಕಾರ್ಡ್(Aadhar card)
- ಭೂಮಿಗೆ ಸಂಬಂಧಿಸಿದ ದಾಖಲೆಗಳು
- ಆದಾಯ ಪ್ರಮಾಣಪತ್ರ
- ಜಾತಿ ಪ್ರಮಾಣ ಪತ್ರ
- ವಿಳಾಸ ಪುರಾವೆ
- ಪಡಿತರ ಚೀಟಿ(Ration Card)
- ಬ್ಯಾಂಕ್ ಖಾತೆ ಪಾಸ್ಬುಕ್
- ಮೊಬೈಲ್ ನಂಬರ(mobile no)
ರೈತಸಿರಿ ಯೋಜನೆ ರೈತರಿಗೆ ಪ್ರೋತ್ಸಾಹ ಧನ ನೀಡುವ ವಿಧಾನ:-
- ಊದಲು, ನವಣೆ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಮೊದಲ ಕಂತಿನಲ್ಲಿ ಬೆಳೆ ಬಿತ್ತನೆ ಮಾಡಿದ 30 ದಿನಗಳ ನಂತರ ರೂ 6000/- ಪ್ರೋತ್ಸಾಹಧನವನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.
- ಎರಡನೇ ಕಂತಿನಲ್ಲಿ ರೂ 4000/- ಪ್ರೋತ್ಸಾಹಧನವನ್ನು ರೈತರ ಬ್ಯಾಂಕ ಖಾತೆಗೆ ನೇರವಾಗಿ ಜಮೆ ಮಾಡುವುದು.
ರೈತಸಿರಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:-
- ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದ ರೈತರು ಸಂಬಂದಿಸಿದ ರೈತ ಸಂಪರ್ಕ ಕೇಂದ್ರಗಳಿಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು.
- ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಬೇಟಿನೀಡಿ ದಾಖಲೆಗಳನ್ನು ಅನ್ವಯಿಸುವುದು.
- ಹೆಚ್ಚಿನ ಮಾಹಿತಿಗಾಗಿ ರೈತರು ನಿಮ್ಮ ನಿಮ್ಮ ರೈತ ಸಂಪರ್ಕ ಕೇಂದ್ರಗಳಿಗೆ ಮತ್ತು ತಾಲ್ಲೂಕು ಕೃಷಿ ಸಹಾಯಕ ಕೇಂದ್ರಕ್ಕೆ ಬೇಟಿನೀಡಬೇಕು.
0 comments
Post a Comment
please do not enter any spam link in the comment box.