ಕರ್ನಾಟಕ ಸರ್ಕಾರವು ರಾಜ್ಯದ ಜನರಿಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಅನೇಕ ರೈತರ ಮಕ್ಕಳು ಸರಿಯಾದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಆ ಕಾರಣದಿಂದ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರುತ್ತಿವೆ. ಈ ಯೋಜನೆಯಡಿ ರೈತರ ಮಕ್ಕಳಿಗೆ ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿವೇತನವನ್ನು ನೀಡಲಾಗುತದೆ. ಇದರಿಂದ ಅವರು ಸರಿಯಾದ ಶಿಕ್ಷಣವನ್ನು ಪಡೆಯಬಹುದು. ಈ ಯೋಜನೆಯ ಲಾಭವನ್ನು ನಿಮ್ಮ ಮಕ್ಕಳು ಕೂಡ ಪಡೆಯಬಹುದು.
ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ ಯೋಜನೆ ಎಂದರೇನು ತಿಳಿಯೋಣ:-
ಕರ್ನಾಟಕ ಸರ್ಕಾರವು 28-07-2021 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ವಿದ್ಯಾರ್ಥಿವೇತನ (scholarship ) ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಚರ್ಚಿಶಿ ಕರ್ನಾಟಕ ಸರ್ಕಾರವು 7ನೇ ಆಗಸ್ಟ್ 2021 ರಂದು 'ರೈತ ವಿದ್ಯಾ ನಿಧಿ' ವಿದ್ಯಾರ್ಥಿವೇತನ 2021-22 ಅನ್ನು ಪ್ರಾರಂಭಿಸಿತು.
ಈ ಯೋಜನೆಯ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಿರುವ ರೈತರ ಮಕ್ಕಳಿಗೆ 2500 ರಿಂದ 11000 ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನವನ್ನು ನೇರವಾಗಿ ವಿಧ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯು ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಯೋಜನೆಯಡಿ ಉನ್ನತ ಶಿಕ್ಷಣವನ್ನು ಪಡೆಯುಬಹುದು ಎಂದು ಪ್ರೋತ್ಸಾಹಿಸುತ್ತದೆ.
ರೈತರ ಮಕ್ಕಳು ಯಾವುದೇ ವಿದ್ಯಾರ್ಥಿವೇತನ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೂ ಸಹ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಯೋಜನೆಯಡಿ 8 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2000 ರೂಪಾಯಿ ವಿದ್ಯಾರ್ಥಿವೇತನವನ್ನು ನೀಡುವುದಾಗಿ ಮಾನ್ಯ ಮುಖ್ಯಮಂತ್ರಿ ಯವರು ಹೇಳಿದಾರೆ.
ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನದ ಮುಖ್ಯಾಂಶಗಳು:-
ಯೋಜನೆಯ ಹೆಸರು:- |
ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ ಯೋಜನೆ |
ಪ್ರಾರಂಭಿಸಿದವರು:- |
ಕರ್ನಾಟಕ ರಾಜ್ಯ ಸರ್ಕಾರ |
ಪ್ರಾರಂಭಿಸಿದ ದಿನಾಂಕ:- |
07-08-2021 |
ಫಲಾನುಭವಿಗಳು :- |
ಕರ್ನಾಟಕ ರಾಜ್ಯದ ರೈತರ ಮಕ್ಕಳು |
ಯೋಜನೆಯ ಉದ್ದೇಶ:- |
ಈ ಯೋಜನೆಯಡಿ ಬಡ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿವೇತನ ನೀಡಲಿದೆ. |
ವಿದ್ಯಾರ್ಥಿವೇತನದ ಮೊತ್ತ:- |
ಕೋರ್ಸ್ ಪ್ರಕಾರ ವಿದ್ಯಾರ್ಥಿವೇತನ ನೀಡಲಾಗುವುದು |
ಅಪ್ಲಿಕೇಶನ್ ವಿಧಾನ:- |
online |
ಅಧಿಕೃತ ವೆಬ್ಸೈಟ್:- |
https://raitamitra.karnataka.gov.in/
|
ರೈತ ವಿದ್ಯಾ ನಿಧಿ ಯೋಜನೆಯ ಅರ್ಹತೆಯ ಮಾನದಂಡ(Eligibility):-
- ಅರ್ಜಿದಾರರ ತಂದೆ ರೈತರಾಗಿರಬೇಕು.
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ರೈತ ವಿದ್ಯಾ ನಿಧಿ ಯೋಜನೆಯ ಲಾಭಗಳು(Benefits):-
- ಈ ಯೋಜನೆ ಮೂಲಕ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
- ಈ ಯೋಜನೆಯ ಮೂಲಕ ಫಲಾನುಭವಿಗಳ ವಿದ್ಯಾರ್ಥಿವೇತನದ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
- ಈ ಯೋಜನೆಯ ಮೂಲಕ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಉತ್ತೇಜನ ನೀಡಲಾಗುವುದು.
- ಅರ್ಜಿದಾರರು ಈಗಾಗಲೇ ಬೇರೆ ಯಾವುದೇ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದಿದ್ದರೆ, ಅಂತಹ ವಿದ್ಯಾರ್ಥಿಕೂಡಾ ಈ ಯೊಜನೆಯ ಲಾಭವನ್ನು ಪಡೆಯಬಹುದು.
- ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ 2 ಸಾವಿರದಿಂದ 11 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಲಿದೆ.
ರೈತ ವಿದ್ಯಾ ನಿಧಿ ಯೋಜನೆಯ ಉದ್ದೇಶ(Objective):-
ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ ಯೋಜನೆಯನ್ನು ಕರ್ನಾಟಕ ಸರ್ಕಾರವು 7 ಆಗಸ್ಟ್ 2021 ರಂದು ಪ್ರಾರಂಭಿಸಿದು. ಈ ಯೋಜನೆಯನ್ನು ಪ್ರಾರಂಭಿಸುವ ಉದ್ದೇಶವು ರಾಜ್ಯದ ಬಡ ರೈತರ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿ ವೇತನವನ್ನು ನೀಡುವುದಾಗಿದೆ. ಫಲಾನುಭವಿಗಳಿಗೆ ರೂಪಾಯಿ 2500 ರಿಂದ 11000 ವರೆಗೆ ಈ ಯೋಜನೆಯಡಿ ವಿದ್ಯಾರ್ಥಿವೇತನದ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ರೈತ ವಿದ್ಯಾ ನಿಧಿ ಯೋಜನೆಗೆ ಅಗತ್ಯವಾದ ದಾಖಲೆಗಳು(Documents):-
- ಆಧಾರ್ ಕಾರ್ಡ್(Aadhar card)
- ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್(Bank passbook)
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ(PP Size photo)
- ರೇಷನ್ ಕಾರ್ಡ್ ಜೆರಾಕ್ಸ್(Ration card Xerox)
- ವಿದ್ಯಾರ್ಥಿ ಗುರುತಿನ ಚೀಟಿ (ID card)
- ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ(Mobile number)
- ಕಾಲೇಜಿನ ಹೆಸರು & ವಿಳಾಸ, ವ್ಯಾಸಂಗದ ತರಗತಿ
- ಆದಾಯ ಪ್ರಮಾಣಪತ್ರ(Income Certificate)
ಕೋರ್ಸ್ ಪ್ರಕಾರ ಒದಗಿಸುತ್ತಿರುವ ಮೊತ್ತದ ಭಾವಚಿತ್ರ :-
ರೈತ ವಿದ್ಯಾ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ (Application process):-
- ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಅಧಿಕೃತ ವೆಬ್ಸೈಟ್ಗೆ ಪ್ರವೇಶಿಸಿದ ನಂತರ ನೀವು ರೈತ ಮಕ್ಕಳಿಗಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮದ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
- ನಿಮ್ಮ ಮುಂದೆ ಹೊಸ ಪುಟ ಕಾಣಿಸುತ್ತದೆ.ಈ ಪುಟದಲ್ಲಿ ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ಹೊಂದಿದ್ದರೆ ಹೌದು ಆಯ್ಕೆಯನ್ನು ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆ, ಹೆಸರು ಮತ್ತು ಲಿಂಗ ಇತ್ಯಾದಿಗಳನ್ನು ನಮೂದಿಸಿ.
- ಅದರ ನಂತರ ನೀವು ಮುಂದುವರೆಯಲು proceed ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಈಗ ಅರ್ಜಿ ನಮೂನೆಯು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ, ನೀವು ಮಾನ್ಯವಾದ ದಾಖಲೆಗಳನ್ನು ನಮೂದಿಸಬೇಕು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ಕೊನೆಯದಾಗಿ ನೀವು submit button ಅನ್ನು ಕ್ಲಿಕ್ ಮಾಡಬೇಕು.
ಫಲಾನುಭವಿಗಳ ಪಟ್ಟಿಯನ್ನು ವೀಕ್ಷಿಸಿ(Beneficiary List):-
- ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿನೀಡಿ.
- ನಿಮ್ಮ ಮುಂದೆ ಮುಖಪುಟ ತೆರೆದುಕೊಳ್ಳುತ್ತದೆ.
- ಈಗ ನೀವು ಫಲಾನುಭವಿಗಳ ಪಟ್ಟಿಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
- ನಿಮ್ಮ ಮುಂದೆ ಹೊಸ ಪುಟ ಕಾಣಿಸುತ್ತದೆ.
- ಈ ಪುಟದಲ್ಲಿ ನೀವು ಅಗತ್ಯವಿರುವ ವಿವರಗಳನ್ನು ನಮೂದಿಸಬೇಕು.
- ಅದರ ನಂತರ ನೀವು ವೀಕ್ಷಣೆ ಪಟ್ಟಿಯನ್ನು ಕ್ಲಿಕ್ ಮಾಡಬೇಕು.
- ಅಗತ್ಯವಿರುವ ಮಾಹಿತಿಯು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ.
ನಿಮ್ಮ ವಿದ್ಯಾರ್ಥಿ IDಯನ್ನು ತಿಳಿದುಕೊಳುವ ವಿಧಾನ:-
- ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.ನಿಮ್ಮ ಮುಂದೆ ಮುಖಪುಟ ತೆರೆದುಕೊಳ್ಳುತ್ತದೆ.
- ಈಗ ನೀವು ರೈತ ಮಕ್ಕಳಿಗಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಕ್ಲಿಕ್ ಮಾಡಬೇಕಾಗುತ್ತದೆ.ಅದರ ನಂತರ ನಿಮ್ಮ ಮುಂದೆ ಹೊಸ ಪುಟ ಕಾಣಿಸುತ್ತದೆ
- ಈಗ ನೀವು ವಿದ್ಯಾರ್ಥಿ ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಿಮ್ಮ ಮುಂದೆ ಹೊಸ ಪುಟ ಕಾಣಿಸುತ್ತದೆ
- ಅದರ ನಂತರ ನೀವು ನಿಮ್ಮ ವಿದ್ಯಾರ್ಥಿ ಐಡಿIDಯನ್ನು ತಿಳಿದುಕೊಳ್ಳಿ ಏನುವಲ್ಲಿ ಕ್ಲಿಕ್ ಮಾ ಡಬೇಕು.
- ಈಗ ನೀವು ನಿಮ್ಮ ನೋಂದಾಯಿಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಅದರ ನಂತರ ನೀವು ವಿದ್ಯಾರ್ಥಿ (ID)ಐಡಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು.ನಿಮ್ಮ ಮುಂದೆ ನಿಮ್ಮ ವಿದ್ಯಾರ್ಥಿ ಐಡಿ ಕಾಣಿಸುತ್ತದೆ.
Read Also:-
Important Links:-
Official website
FAQ's:-
- ರೈತ ವಿದ್ಯಾ ನಿಧಿ ಯೋಜನೆಗೆ ಯಾರು ಅರ್ಹರು(Eligible)?
ಅರ್ಜಿದಾರರ ತಂದೆ ರೈತರಾಗಿರಬೇಕು. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಈ ಯೋಜನೆಯನ್ನು ಪ್ರಾರಂಭಿಸುವ ಉದ್ದೇಶವು ರಾಜ್ಯದ ಬಡ ರೈತರ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿ ವೇತನವನ್ನು ನೀಡುವುದಾಗಿದೆ.
8 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2000 ರೂಪಾಯಿ ವಿದ್ಯಾರ್ಥಿವೇತನವನ್ನು ನೀಡುವುದೆಂದು ಹೊಸ ಅಪ್ಡೇಟ್ ನೀಡಿದಾರೆ.
- ಈ ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು?
ಈ ಯೋಜನೆಯು 07-08-2021 ರಂದು ಪ್ರಾರಂಭಿಸಲಾಯಿತು.
- ಅರ್ಜಿದಾರರು ಈಗಾಗಲೇ ಬೇರೆ ಯಾವುದೇ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದಿದ್ದರೆ, ಅಂತಹ ವಿದ್ಯಾರ್ಥಿಕೂಡಾ ಈ ಯೊಜನೆಯ ಲಾಭವನ್ನು ಪಡೆಯಬಹುದೆ?
ಅರ್ಜಿದಾರರು ಈಗಾಗಲೇ ಬೇರೆ ಯಾವುದೇ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದಿದ್ದರೆ, ಅಂತಹ ವಿದ್ಯಾರ್ಥಿಕೂಡಾ ಈ ಯೊಜನೆಯ ಲಾಭವನ್ನು ಪಡೆಯಬಹುದು.
ಈ ಯೋಜನೆಯ ನವೀಕರಣಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
0 comments
Post a Comment
please do not enter any spam link in the comment box.